ಸಾವಿನ ಸಮಾನತೆ
-----------------
ಕೋಟೆ-ಕೊತ್ತಲುಗಳನೂ ದಾಟಿ
ಬರಲಾರದೆ ಸಾವು ?
ಬಯಲು-ಗುಡಿಸಲುಗಳನು
ಹೊಕ್ಕಷ್ಟೇ ಸುಲಭದಲಿ.
ಮೇರು ತಾನೆ೦ದು
ಮೆರೆದವರಿಗೆ
ಮಿಗಿಲು ತಾನೆ೦ದು
ತೋರಲು.
ಗುಡಿಸಲಿನ ಗ೦ಜಿಯು೦ಡು
ನೆಲವನಪ್ಪಿ ಮಲಗಿದರೂ
ಹಾಲು-ತುಪ್ಪವನೇ ಉ೦ಡು
ಸುಖಾಸನದಲೇ ತೂಗಿದರೂ
ದೇಹ, ಮಣ್ಣಿಗದು ಮಣ್ಣೇ
ಕೊಳೆಯದೇ ಇರದು
ನಾಕಿರುಳಿನೊಳು.
ಸಿರಿಯ ದೇಹವದು ಸವಿಯಲ್ಲ
ಬಡವನಾ ತನುವು ಕಹಿಯಲ್ಲ
ಮಣ್ಣಿಗಿಳಿದ ಮೇಲೆ ಗೆದ್ದಲಿನ ಆಹಾರ
ಮೇಲು-ಕೀಳು ಅಲ್ಲಿಲ್ಲ.
-----------------
ಕೋಟೆ-ಕೊತ್ತಲುಗಳನೂ ದಾಟಿ
ಬರಲಾರದೆ ಸಾವು ?
ಬಯಲು-ಗುಡಿಸಲುಗಳನು
ಹೊಕ್ಕಷ್ಟೇ ಸುಲಭದಲಿ.
ಮೇರು ತಾನೆ೦ದು
ಮೆರೆದವರಿಗೆ
ಮಿಗಿಲು ತಾನೆ೦ದು
ತೋರಲು.
ಗುಡಿಸಲಿನ ಗ೦ಜಿಯು೦ಡು
ನೆಲವನಪ್ಪಿ ಮಲಗಿದರೂ
ಹಾಲು-ತುಪ್ಪವನೇ ಉ೦ಡು
ಸುಖಾಸನದಲೇ ತೂಗಿದರೂ
ದೇಹ, ಮಣ್ಣಿಗದು ಮಣ್ಣೇ
ಕೊಳೆಯದೇ ಇರದು
ನಾಕಿರುಳಿನೊಳು.
ಸಿರಿಯ ದೇಹವದು ಸವಿಯಲ್ಲ
ಬಡವನಾ ತನುವು ಕಹಿಯಲ್ಲ
ಮಣ್ಣಿಗಿಳಿದ ಮೇಲೆ ಗೆದ್ದಲಿನ ಆಹಾರ
ಮೇಲು-ಕೀಳು ಅಲ್ಲಿಲ್ಲ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ