ಶನಿವಾರ, ಸೆಪ್ಟೆಂಬರ್ 7, 2013

ಸಾವಿನ ಸಮಾನತೆ
-----------------

ಕೋಟೆ-ಕೊತ್ತಲುಗಳನೂ ದಾಟಿ
ಬರಲಾರದೆ ಸಾವು ?
ಬಯಲು-ಗುಡಿಸಲುಗಳನು
ಹೊಕ್ಕಷ್ಟೇ ಸುಲಭದಲಿ.
ಮೇರು ತಾನೆ೦ದು 
ಮೆರೆದವರಿಗೆ
ಮಿಗಿಲು ತಾನೆ೦ದು
ತೋರಲು.

ಗುಡಿಸಲಿನ ಗ೦ಜಿಯು೦ಡು
ನೆಲವನಪ್ಪಿ ಮಲಗಿದರೂ
ಹಾಲು-ತುಪ್ಪವನೇ ಉ೦ಡು
ಸುಖಾಸನದಲೇ ತೂಗಿದರೂ
ದೇಹ, ಮಣ್ಣಿಗದು ಮಣ್ಣೇ
ಕೊಳೆಯದೇ ಇರದು
ನಾಕಿರುಳಿನೊಳು.

ಸಿರಿಯ ದೇಹವದು ಸವಿಯಲ್ಲ
ಬಡವನಾ ತನುವು ಕಹಿಯಲ್ಲ
ಮಣ್ಣಿಗಿಳಿದ ಮೇಲೆ ಗೆದ್ದಲಿನ ಆಹಾರ
ಮೇಲು-ಕೀಳು ಅಲ್ಲಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ