ಶನಿವಾರ, ಸೆಪ್ಟೆಂಬರ್ 7, 2013

ಸೃಷ್ಠಿಯ ಸಮ್ಮೋಹನ
-----------------

ಕರಿಮೋಡಗಳೆರಡರ ಮಿಲನದಲಿ 
ಹಾಲ್ಬಿಳುಪಿನ ಮಿ೦ಚುಗಳ ಪ್ರಸವ,
ಬಣ್ಣಗಳ ಹ೦ಗಿಲ್ಲದ ಮಳೆಹನಿಯು
ಅರುಣಕಿರಣಗಳಲಿ ಬೆರೆತು
ಸಪ್ತವರ್ಣದ ಉಗಮ.

ಕಾಯಕ
--------

ಬೇವಿನೆಣ್ಣೆಯೇನು?
ಹೊ೦ಗೆಯ ತೈಲವೇನು?
ಬತ್ತಿಯನು ಹೊಕ್ಕು ಉರಿಸಿ
ಜಗದ ತಾಮಸ ಕಳೆವ
ಬೆಳಕಾಗಲು, ಕ್ಷೀರದೊಡಲಿನ
ತುಪ್ಪವೇ ಆಗಬೇಕೆ೦ಬ
ನಿಯಮವಿಲ್ಲ.

ವ್ಯತ್ಯಾಸ
--------

ನಾಡಿನಲಿ ಸತ್ತರೆ ನಡೆವವು
ಮೆರವಣಿಗೆ, ಅ೦ತ್ಯ ಸ೦ಸ್ಕಾರ
ಪುಣ್ಯತಿಥಿ, ವೈಕು೦ಠ ಸಮಾರಾಧನೆ.

ಕಾಡಿನಲಿ ಸತ್ತರೆ ಬರುವವು
ಮಾಸಿದ ಮಾ೦ಸಕ್ಕಾಗಿ
ರಣಹದ್ದು-ಕಾಗೆ, ನರಿ-ತೋಳ ಸೀಳುನಾಯಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ