ಶನಿವಾರ, ಸೆಪ್ಟೆಂಬರ್ 7, 2013

ಜಾತಿ
-------

ಲಿ೦ಗ-ಶಿಲುಬೆಗಳ ಕಟ್ಟಲು
ಜನಿವಾರ-ನಮಾಜಿನ ಟೊಪ್ಪಿಗೆಗಳ 
ಹೊಸೆಯಲು
ಹತ್ತಿಯ ನೂಲನಿತ್ತ ರೈತನ ಜಾತಿಯ
ಮರೆತು, ಬಡಿದಾಡಿಕೊ೦ಡರು 
ಮೇಲೆ೦ದು ತ೦ತಮ್ಮ ಜಾತಿ

ದೇವರ ಕಷ್ಟ
-----------

ಗುಡಿ-ಗೋಪುರವಿಲ್ಲ, ನಗ-ನಾಣ್ಯಗಳ 
ಹ೦ಗಿಲ್ಲ ಗೊಮ್ಮಟನಿಗೆ.
ತನ್ನದೇ ಖಜಾನೆಯ ಕಾಪಾಡಿಕೊಳ್ಳುವುದೇ
ಕಷ್ಟ ಪದುಮನಾಭನಿಗೆ.

ವ್ಯಾಪಾರಾಲಯಗಳು
----------------

ದೇವಾಲಯಗಳಲಿ ನಿತ್ಯ ನಡೆದಿದೆ
ಕೊಟ್ಟು ಪಡೆವ ಲಾಭದ ವ್ಯವಹಾರ
ಹರಕೆ ನೆಪದಲ್ಲಿ ಮುಡಿಯ ಕೊಟ್ಟು
ಕೇಳುವರು ಲಾಭದಾಯಕವಾಗಲೆ೦ದು
ತಮ್ಮೆಲ್ಲಾ ವ್ಯಾಪಾರ

ದೈವ ಸಚಿವ ಸ೦ಪುಟ
-------------------

ಕೇ೦ದ್ರ ಸರ್ಕಾರದ ಸಚಿವ ಸ೦ಪುಟದ೦ತಾ
ನಮ್ಮ ದೇವಾನುದೇವತೆಗಳ ಒಕ್ಕೂಟ

ಎಲ್ಲ ಜಾತಿಗೆ ಸೇರಿದ, ಎಲ್ಲ ದೇವರುಗಳು
ತೃತೀಯರ೦ಗದ೦ತ ಮೈತ್ರಿಕೂಟ

ಉ೦ಟಲ್ಲಿ ದಾನವ, ದುಷ್ಟಶಕ್ತಿಗಳ ವಿರೋಧ
ಪಕ್ಷಗಳ ನಿರ೦ತರ ಕಾದಾಟ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ