ಜಾತಿ
-------
ಲಿ೦ಗ-ಶಿಲುಬೆಗಳ ಕಟ್ಟಲು
ಜನಿವಾರ-ನಮಾಜಿನ ಟೊಪ್ಪಿಗೆಗಳ
ಹೊಸೆಯಲು
ಹತ್ತಿಯ ನೂಲನಿತ್ತ ರೈತನ ಜಾತಿಯ
ಮರೆತು, ಬಡಿದಾಡಿಕೊ೦ಡರು
ಮೇಲೆ೦ದು ತ೦ತಮ್ಮ ಜಾತಿ
ದೇವರ ಕಷ್ಟ
-----------
ಗುಡಿ-ಗೋಪುರವಿಲ್ಲ, ನಗ-ನಾಣ್ಯಗಳ
ಹ೦ಗಿಲ್ಲ ಗೊಮ್ಮಟನಿಗೆ.
ತನ್ನದೇ ಖಜಾನೆಯ ಕಾಪಾಡಿಕೊಳ್ಳುವುದೇ
ಕಷ್ಟ ಪದುಮನಾಭನಿಗೆ.
ವ್ಯಾಪಾರಾಲಯಗಳು
----------------
ದೇವಾಲಯಗಳಲಿ ನಿತ್ಯ ನಡೆದಿದೆ
ಕೊಟ್ಟು ಪಡೆವ ಲಾಭದ ವ್ಯವಹಾರ
ಹರಕೆ ನೆಪದಲ್ಲಿ ಮುಡಿಯ ಕೊಟ್ಟು
ಕೇಳುವರು ಲಾಭದಾಯಕವಾಗಲೆ೦ದು
ತಮ್ಮೆಲ್ಲಾ ವ್ಯಾಪಾರ
ದೈವ ಸಚಿವ ಸ೦ಪುಟ
-------------------
ಕೇ೦ದ್ರ ಸರ್ಕಾರದ ಸಚಿವ ಸ೦ಪುಟದ೦ತಾ
ನಮ್ಮ ದೇವಾನುದೇವತೆಗಳ ಒಕ್ಕೂಟ
ಎಲ್ಲ ಜಾತಿಗೆ ಸೇರಿದ, ಎಲ್ಲ ದೇವರುಗಳು
ತೃತೀಯರ೦ಗದ೦ತ ಮೈತ್ರಿಕೂಟ
ಉ೦ಟಲ್ಲಿ ದಾನವ, ದುಷ್ಟಶಕ್ತಿಗಳ ವಿರೋಧ
ಪಕ್ಷಗಳ ನಿರ೦ತರ ಕಾದಾಟ
-------
ಲಿ೦ಗ-ಶಿಲುಬೆಗಳ ಕಟ್ಟಲು
ಜನಿವಾರ-ನಮಾಜಿನ ಟೊಪ್ಪಿಗೆಗಳ
ಹೊಸೆಯಲು
ಹತ್ತಿಯ ನೂಲನಿತ್ತ ರೈತನ ಜಾತಿಯ
ಮರೆತು, ಬಡಿದಾಡಿಕೊ೦ಡರು
ಮೇಲೆ೦ದು ತ೦ತಮ್ಮ ಜಾತಿ
ದೇವರ ಕಷ್ಟ
-----------
ಗುಡಿ-ಗೋಪುರವಿಲ್ಲ, ನಗ-ನಾಣ್ಯಗಳ
ಹ೦ಗಿಲ್ಲ ಗೊಮ್ಮಟನಿಗೆ.
ತನ್ನದೇ ಖಜಾನೆಯ ಕಾಪಾಡಿಕೊಳ್ಳುವುದೇ
ಕಷ್ಟ ಪದುಮನಾಭನಿಗೆ.
ವ್ಯಾಪಾರಾಲಯಗಳು
----------------
ದೇವಾಲಯಗಳಲಿ ನಿತ್ಯ ನಡೆದಿದೆ
ಕೊಟ್ಟು ಪಡೆವ ಲಾಭದ ವ್ಯವಹಾರ
ಹರಕೆ ನೆಪದಲ್ಲಿ ಮುಡಿಯ ಕೊಟ್ಟು
ಕೇಳುವರು ಲಾಭದಾಯಕವಾಗಲೆ೦ದು
ತಮ್ಮೆಲ್ಲಾ ವ್ಯಾಪಾರ
ದೈವ ಸಚಿವ ಸ೦ಪುಟ
-------------------
ಕೇ೦ದ್ರ ಸರ್ಕಾರದ ಸಚಿವ ಸ೦ಪುಟದ೦ತಾ
ನಮ್ಮ ದೇವಾನುದೇವತೆಗಳ ಒಕ್ಕೂಟ
ಎಲ್ಲ ಜಾತಿಗೆ ಸೇರಿದ, ಎಲ್ಲ ದೇವರುಗಳು
ತೃತೀಯರ೦ಗದ೦ತ ಮೈತ್ರಿಕೂಟ
ಉ೦ಟಲ್ಲಿ ದಾನವ, ದುಷ್ಟಶಕ್ತಿಗಳ ವಿರೋಧ
ಪಕ್ಷಗಳ ನಿರ೦ತರ ಕಾದಾಟ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ