ಶುಕ್ರವಾರ, ಮೇ 17, 2013

ಪ್ರಿಯ ಮಿತ್ರರೇ ,

ದಿನಾ ರಾತ್ರಿ ಊಟ ಆದ ಮೇಲೆ ವಾಯುವಿಹಾರದ ನೆಪದಲ್ಲಿ ಹೊರಟು , ನಮ್ಮ ಬೀದಿಯ ನಾಲ್ಕನೇ
ಮನೆಯ ಬೇಲಿಯ೦ಚಿನಲ್ಲಿ ಹಬ್ಬಿರುವ ಬಳ್ಳಿಯಿ೦ದ ನಾಲ್ಕಾರು ಏಳುಸುತ್ತಿನ ಮಲ್ಲಿಗೆ ಕದ್ದು , ಮೂರು
ಮನೆ ದಾಟುವಷ್ಟರಲ್ಲೇ ಆರು ಬಾರಿ ಆಘ್ರಾಣಿಸಿ , ಅರ್ಧ ಘಮವ ನಾನೇ ಸವಿದು , ಉಳಿದರ್ಧ
ಪರಿಮಳದೊ೦ದಿಗೆ ಹೂಗಳನ್ನು ನನ್ನಾಕೆಯ ಕೈಗಿಡುವಾಗ , ಮನಸ್ಸಿನಲ್ಲಿ ಬಯಕೆಯರಳಿ , ಕಣ್ಣುಗಳು
ಆತುರದ ಸನ್ನೆಗೈಯ್ಯುತ್ತಿರಲು , ಸ್ವಾಭಿಮಾನವೆ೦ಬುದು ಶಿಳ್ಳೆ ಹಾಕಿ , ಚಪ್ಪಾಳೆ ತಟ್ಟಿ , ಅಣಕದ 
ನಗೆ ನಗುತ್ತಿತ್ತು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ