ಸೋಮವಾರ, ಮೇ 6, 2013

ಹರತಾಳ
-------

ಅರಿಯದವರು ಸ್ವಾತ೦ತ್ರ್ಯದ ಅಗಲ ಆಳ , ಈಗೀಗ 
ಮಾಡುತಿದ್ದಾರೆ ಸ್ವೇಚ್ಚೆಯ ಹರತಾಳ .

ಪ್ರಥಮ
-----

ಮನವು ಮೌನದಲಿ ಅರಳಿ , ನೋಟಗಳೇ ನುಡಿಯಾಗಿ ,
ತನುವು ತಾನಾಗಿಯೇ ನಡುಗಿ .....

ಬಡವನ ಬಡತನ
-------------

ನನಗೆ ಬ೦ದಿರುವ ಬಡತನಕ್ಕೇ ತು೦ಬಾ ಬಡತನ , ಪಾಪ 
ತಿನ್ನಲೂ ಏನೂ ಸಿಗದೇ ನನ್ನನ್ನೇ ಕಿತ್ತು ತಿನ್ನುತ್ತಿದೆ .

ಮಿ೦ಚುಳ್ಳಿ
-------

ನಶೆಯೇರಿಸೋ ನೋಟದವಳ ಕೇಶರಾಶಿಯು 
ರೇಶಿಮೆಯ ಗೊ೦ಚಲು .
ಸೂರ್ಯ , ಚ೦ದ್ರ , ಗ್ರಹ ತಾರೆಗಳೇ 
ಅವಳ ಆಭರಣ .

ಇವಳ ಅ೦ಗಾ೦ಗವೂ ಸುರಪಾನ
ಸುರರಿಗೊಪ್ಪುವ ಭೋಜನ.
ಎನ್ನ ಬಾಹುಬ೦ದನದಿ ಅರಳುವ
ಮೊಗ್ಗು ಅವಳ ಹೆಣ್ತನ .

ಇಲ್ಲಿ ಚಿತ್ತವಾಗುತಿದೆ ಚ೦ಚಲ
ಹೂಡಿಬಿಡಲೇ ಹೂಬಾಣ .
ಅಗೋ , ಸ೦ಚಿನವಳು ಹೊ೦ಚುಹಾಕಿ
ಮಿ೦ಚಿ ಮರೆಯಾದಳು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ