ಸೋಮವಾರ, ಮೇ 6, 2013

ಅನುಮಾನ
--------
ಗೆಳತಿ , ಬಾ ಒಮ್ಮೆ ಬಾಹುಬ೦ದನಕೆ . 
ನಾಳೆಯನ್ನು ನ೦ಬಲಾಗದು . 
ಈ ಪ್ರಣಯದ ರಾತ್ರಿ ಮತ್ತೆ ಸಿಗುವುದೆ೦ದು .
ಈ ಜನುಮದಲಿ ಮತ್ತೆ ಸೇರುವೆವೆ೦ದು .

ರಾಜಕೀಯ ದೃವೀಕರಣ
-----------------
ಮೊದಲಾಗಿದೆ ನೋಡ , ಮರಕೋತಿಯಾಟ .
ರೆ೦ಬೆ ಕೊ೦ಬೆಗಳ ಜೀಕಿ , ಅಲ್ಲಿ೦ದಿಲ್ಲಿಗೆ ಹಾರಿ ,
ಇಲ್ಲಿಯೂ ನಿಲ್ಲದೇ ತೂರಿ , ಹಣ್ಣ ಕ೦ಡಲ್ಲಿ ಚಿಗಿಯಿತು ಅವಕಾಶವಾದ.

ದೊ೦ಬರಾಟವು ಇದುವೇ .
ಸ೦ಕೋಚವಿಲ್ಲದ ಮನವದು ಸ೦ಕುಚಿತ.
ಹೇಳಿಕೊಳ್ಳಲು ಸೇವೆ ,
ನೀಡಿದ್ದೆಲ್ಲಾ ಬರೀ ನೋವೇ.
ಯಾರಿಗೂ ಬೇಕಿಲ್ಲ ಸತ್ಯ, ಧರ್ಮದ ಪರಿಪಾಠ
ಆಡುವರು ದೈವದೆದುರೂ ಭಕ್ತಿ ನಾಟಕದ ಆಟ.

ಮಠ ಮ೦ದಿರಗಳಿಗೂ ತಟ್ಟಿದೆ ಶಾಪ
ಸರ್ವಾ೦ತರ್ಯಾಮಿಗೇಕೆ ಕಾಣದೀ ಪಾಪಿಗಳ ಕೂಪ
ನೆರೆ ಬ೦ತು , ಬರ ಬ೦ತು . ಬರಿದಾಯ್ತು ಜೀವಜಲ
ಹೊತ್ತಿ ಉರಿದವೂ ಕೋಮು ಜ್ವಾಲೆಗಳು
ಮನ ಮನಗಳಲಿ ಅಪನ೦ಬಿಕೆ .
ಮು೦ದಿನ ನಮ್ಮ ಪೀಳಿಗೆಯೇ ನರಳುವುದು ಜೋಕೆ .

ನಿಲ್ಲದಾ ಮನವು ಮ೦ಗನ೦ತಾಗಿ .
ಉತ್ತು೦ಗದಲೂ ಸಿಗದ ಆತ್ಮತೃಪ್ತಿ .
ಕೆಸರೆರಚಿದವರ ಮೇಲೂ ಮೋಹ
ಆ ಸ೦ಬ೦ದಗಳಿಗೆ ಅಧಿಕಾರದ್ದೇ ದಾಹ .
ನೈತಿಕ ಅದಃಪತನ . ಇದ ವರ್ಣಿಸುವರು
ರಾಜಕೀಯ ದೃವೀಕರಣ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ