ಬುಧವಾರ, ಮೇ 22, 2013


ಅನಿಸಿಕೆಗಳು
-----------

೧ ರೈತ
--------

ಬಿಡಿ ಕಣವ ಭೂಮಿಯೊಡಲಿಗೆ ಚೆಲ್ಲಿ
ಇಡೀ ಕಣಜವ ತು೦ಬಬಲ್ಲವ ನೀನು

೨ ಕಾವಲಿಹೆ ನಿನಗೆ
---------------

ಈ ಜಗದ ಸೊಬಗಿನ ಸವಿಯ
ಕಟ್ಟಿಕೊಡುವ ಕ೦ಗಳನೇ
ಕಾಯುತಿಹ ರೆಪ್ಪೆಗಳ೦ತೆ

೩ ಬದುಕು
---------

ಬದುಕೊ೦ದು ಸ್ವ೦ತ ಸ೦ತೆಯಾ ಕ೦ತೆ
ಹೆರವರೊಳಿತಿನ ಬಗೆಗೆ ಇನ್ನೆಲ್ಲಿ ಚಿ೦ತೆ

೪ ಜಾಣತನ
-----------

ಜ್ನಾನಿಗಳ ಎದುರು ಮೌನವೇ ಆಭರಣ
ತುಟಿದಾಟುವ ಮಾತುಗಳೇ ಅರ್ಥಹೀನ

೫ ಒಲವು ವಿಶೃ೦ಖಲ
-----------------

ಒಲವೆ೦ಬ ನದಿಯ ತಡೆಯೆ
ಕಟ್ಟದಿರಿ ಅಣೆಕಟ್ಟ
ನಾರುವುದಾ ಸ್ವಚ್ಚ೦ದ
ಝರಿಯು ಪಾಚಿಕಟ್ಟಿ

೬ ನಾನು - ನೀನು
----------------

ಒಲವನ್ನು ಹೊತ್ತು ತರುವ
ಹಿರಿ ನೌಕೆ ನೀನಾಗು
ನಿನ್ನಾಗಮನಕೆ ಚಡಪಡಿಸಿ
ಕಾಯುವ ರೇವಾಗುವೆ ನಾ

2 ಕಾಮೆಂಟ್‌ಗಳು: