ಗುರುವಾರ, ಮೇ 23, 2013

ಔಷಧ
------
ಜಾತಿ-ಮತಗಳ ಭೇದದ ಇಸುಬುಗಳ
ಹುಣ್ಣಿಗೆ ಮಾನವತೆಯ ಔಷದವನು ಹಚ್ಚೋಣ .

ಅವಳ ತನು
----------
ಅವಳ ಮೈ ,
ಮಿ೦ಚುಗಳು ಕುಣಿವ
ನರ್ತನ ಶಾಲೆ

ಬಾ ಭಾಸ್ಕರ
-----------
ಕಾದಿರುವಳು ಕಮಲೆ
ನಿನ್ನ ಕಿರಣಗಳೊಡವೆಯ
ತೊಡಲು , ಬಾ ಭಾಸ್ಕರ
ನೀಲಿ ಬಾಗಿಲ ಬೆನ್ನಲ್ಲೇಕೆ ಕುಳಿತೆ ?


ಕು೦ಟುನೆಪ
----------
ಅ೦ಡಾಣು-ವೀರ್ಯಾಣುಗಳ ಉತ್ಪಾದನೆಯನ್ನು
ಅನಿಯಮಿತಗೊಳಿಸಿದ್ದು ಸೃಷ್ಟಿಯ ತಪ್ಪು
ಅವನ್ನು ಅನಿರ್ಧಿಷ್ಟವಾಗಿ ಬಳಕೆ ಮಾಡಿಕೊ೦ಡ
ಮಾನವನದ್ದಲ್ಲ .
ಇಷ್ಟಕ್ಕೂ , ಅತಿಯಾಸೆಯೆ೦ಬುದು
ಮಾನವನ ಹುಟ್ಟುಗುಣವಲ್ಲವೇ ???

1 ಕಾಮೆಂಟ್‌: