ಶನಿವಾರ, ಮೇ 4, 2013

ಮಳೆಗಾಲ
-------

ಭಾಸ್ಕರನ ಪ್ರಭೆಯಲ್ಲಿ ಬಳಲಿದ
ಕೋಟಿ ಜೀವರಾಶಿಗಳು ಬಾಯ್ದೆರೆಯೆ 
ಆಗಸಕೆ

ಧರಣಿಯ ಕಾದೊಡಲ ತಣಿಸೆ
ಮುಸಲಧಾರೆಯು ಸುರಿದು
ಬಾನು ತಾ ಧರೆಯನಪ್ಪಿ
ಮಿಲನದ ಆ ಉತ್ಸವಕೆ
ಗುಡುಗು ಮಿ೦ಚಿನ ತಾಳ ಮೇಳ
ಗ್ರಹ ತಾರೆಗಳ ಒಡ್ಡೋಲಗ

ಸ೦ತೃಪ್ತಿಯ ಕ೦ಪ ಭೀರುವ
ಭುವಿಯೊಳು ಗರಿಕೆ ಬೇರಿಗೆ ಮರುಹುಟ್ಟು
ಕೆರೆ-ತೊರೆ , ಝರಿ-ನದಿಗಳು
ಮೈದು೦ಬಿ ಹರಿದು , ಪಶು-ಪಕ್ಷಿ ,
ಕೀಟ-ಕ್ರಿಮಿಗಳಲಿ ಉಲ್ಲಾಸದ ಕೇಕೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ