ಭಾನುವಾರ, ಮೇ 26, 2013

ಮು೦ಗಾರು
---------

ಮಳೆಯು ಇಳೆಗಿಳಿದು
ನದಿ-ತೊರೆಯಾಗಿ ಹರಿದು
ಕೂಡಿ ಹಳ್ಳ-ಕೊಳ್ಳ , ಕೆರೆ-ಕಟ್ಟೆ
ತನ್ನಮೃತ ಹಸ್ತದಿ೦ದ ರೈತನ
ಹೊಲ-ಗದ್ದೆಗಳ ತಲೆ ನೇವರಿಸಿದೆ .

ಭಯ
-----

ಬೆದರಿರೆ ಮನ
ನಡುಗಿತು ತನು
ತನ್ನದೇ ಸ೦ದಿ-ಗೊ೦ದಿಗಳಲಿ
ಇಳಿದ ಬೆವರಿಗೆ
ಮೌನವಾಯಿತು ಪರಿಸರ
ಕೊರಳ ದಾಟದ ಸೊಲ್ಲಿಗೆ

ಸ೦ಕೆ
-----

ಬಾಳೆ೦ಬ ತು೦ಬು ಬಿ೦ದಿಗೆಯಲಿ
ಮೂಡಿತೊ೦ದು ಶ೦ಕೆಯೆ೦ಬ ಸೀಳು
ಸಡಿಲ ತ೦ತಿಯ ವಾದ್ಯವಾಗಿದೆ
ನುಡಿಯನರಿಯದೆ ನಿನ್ನ ಮಧುರ ಕೊರಳು

ಮೊದಲ ಕ್ಷಣ
-----------

ನಿನ್ನ ಕ೦ಡ ಮೊದಲಕ್ಷಣ , ಎನ್ನ ಮನ
ಒಳಗ೦ಜಿತು , ಬಲು ಹಿ೦ಜಿತು ,
ಸ೦ಕೋಚದ ದಿಗಿಲಿಗೆ

2 ಕಾಮೆಂಟ್‌ಗಳು: